ಆಗಾಗ ವಿಹಾರಕ್ಕಾಗಿ ಹೋಗುತಿದ್ದ ನನ್ನಗೆ ಇತ್ತಿತ್ತಲಾಗಿ ಚಳಿಯ ಕಚಗುಳಿಯಿಂದಾಗಿ ಮೇಲೇಳಲು ಮನಸಾಗುತ್ತಿಲ್ಲ. ಚಳಿಯಿಂದ ದೇಹ ರಕ್ಷಣೆಗಾಗಿ ಸ್ವೆಟರ್ ಸ್ಕಾರ್ಪ್ ಮೊರೆ ಹೊಗಿ ಬೆಚ್ಚನೆ ಹೊದ್ದು ಮಲಗಿದರೆ ಬೆಳಿಗ್ಗೆ ಎಳೋದು ಎಂಟು ಗಂಟೆ. ನೆಪಕ್ಕೆ ಮಾತ್ರ 5:30 ಅಲಾರಾಂ. ಅಲಾರಾಂ ಹೋಗಿದಾಗ ಎದ್ದೇಳದಷ್ಟು ಬೇಸರ. ಇಂದು ಗಟ್ಟಿ ಮನಸು ಎದ್ದು ವಿಹಾರಕ್ಕೆ ಹೊರಟು ನಿಂತೆ.
ಕೊರೆವ ಚುಮು ಚುಮು ಚಳಿ ಮೈಗೆ ಕಚಗುಳಿ ನೀಡುತಿತ್ತು. ತಂಗಾಳಿಗೆ ತುಗುತ್ತಾ ಬೇಸತ್ತು ನಿಂತ ಮರಗಳಿಗೆ ಟೊಳಲಿನ ಸಂದುಗಳಿಂದ ಇಣುಕುತ್ತ ಸೂರ್ಯ ಮರುಜೀವ ಬಂದಿತ್ತು. ಮುಳ್ಳಿನ ಕಂಠಿಗೆ ನೇಯ್ದ ಜೇಡರ ಬಲೆಗೆ ಇಬ್ಬನಿ ಮುತ್ತು ತೊಡಸಿ ಮಿರಮಿರ ಮಿರಗುತಿತ್ತು.
ಕವಿದ ಮೊಬ್ಬು ಮಂಜು ರಾಶಿ ಸೂರ್ಯನ ಶಾಖಕ್ಕೆ ಮೆಲ್ಲಗೆ ಕರಗುತ್ತಿತ್ತು. ನಾಲೆಯಲ್ಲಿ ಜುಳು ಜುಳು ಹರಿಯುವ ನೀರು ಹೊಂಬಣ್ಣ ಚೆಲ್ಲಿತ್ತು. ಈ ಪ್ರಕೃತಿಯ ಸೌಂದರ್ಯ ಸವಿಯಲು ನನ್ನ ಮೊಬೈಲ್ ಹಾತೊರೆಯುತ್ತಿತ್ತು.
------------------------------------------------------
▪️ ಬಸವರಾಜ ಭೂತಿ, ಶಿಕ್ಷಕರು
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ
ಬೇವಿನಹಳ್ಳಿ ಕ್ರಾಸ್, ಶಹಾಪುರ
No comments:
Post a Comment