Thursday, March 16, 2023

ಶ್ರೀಮತಿ ಸುರಯ್ಯ ಹಾದಿಮನಿಯವರ ಚೊಚ್ಚಲಕೃತಿ "ಮನದಂಗಳದಿ" ಲೋಕಾರ್ಪಣೆ..

ಶ್ರೀಮತಿ ಸುರಯ್ಯ ಹಾದಿಮನಿಯವರ ಚೊಚ್ಚಲಕೃತಿ "ಮನದಂಗಳದಿ" ಲೋಕಾರ್ಪಣೆ

ಶಹಾಪುರ ತಾಲೂಕಿನ ಬೇವಿನಹಳ್ಳಿ ಕ್ರಾಸ್ ನಲ್ಲಿರುವ  ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ  ಪ್ರಾಂಶುಪಾಲರು ಹಾಗೂ ಯಾದಗಿರಿ ಜಿಲ್ಲೆಯ ಜಿಲ್ಲಾ ಸಮನ್ವಯ ಅಧಿಕಾರಿಗಳಾದ ಶ್ರೀಮತಿ ಸುರಯ್ಯಬೇಗಂ ಹಾದಿಮನಿ ಅವರ ಕವನಗಳ ಸಂಕಲನ- ಮನದಂಗಳದಿ, ಕೃತಿಯು ದಿನಾಂಕ ೧೯-೦೩-೨೦೨೩ ರಂದು ಲೋಕರ‍್ಪಣೆ ಗೊಳ್ಳುತ್ತಿದೆ. ಇವರ ಕವನ ಸಂಕಲನಕ್ಕೆ ಕೊಪ್ಪಳದ ಗವಿ ಸಿದ್ದೇಶ್ವರ ಸಂಸ್ಥಾನ ಮಠದ ಶ್ರೀಗಳು   ಮನದಂಗಳದಿ, ಎಲ್ಲರ ಮನೆಂಗಳ ತಲುಪಲೆಂದು ಶುಭ ಹಾರೈಸಿದ್ದಾರೆ.  
KREIS ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ರಮೇಶ್ ದೇಸಾಯಿಯವರು ತಮ್ಮ ಆಸಯದ ನುಡಿ ಬರೆದು ಸಂತಸ ವ್ಯಕ್ತಪಡಿಸಿದ್ದಾರೆ.
ಹುಟ್ಟು ಹುಟ್ಟು ಹೋರಾಟಗಾರ್ತಿ ಹಾಗೂ ಸಾಹಿತಿಗಳಾದ ಶ್ರೀಮತಿ ಮೀನಾಕ್ಷಿ ಬಾಳಿ ಅವರು ಇವರ ಕವನ ಸಂಕಲನಕ್ಕೆ ಮುನ್ನುಡಿ  ಬರೆದು ‘ವೈಚಾರಿಕ ಚಿಂತನೆಯ  ಪ್ರಬುದ್ಧತೆಯನ್ನು ಒಳಗೊಂಡ ಹಾಗೂ ಅಧ್ಯಾತ್ಮದ ಛಾಯೆಯನ್ನು ಇವರ ಕವಿತೆಗಳಿಗೆ ಹಿಡಿದ ಕೈಗನ್ನಡಿಗೆ ಯಾಗಿವೆ  ಎಂದು ಪ್ರಶಂಸಿಸಿದ್ದಾರೆ, 
ಇನ್ನೋರ್ವ ಸಾಹಿತಿಗಳು ಸಮಾಜ ಸೇವಕರಾದ  ಕೆ. ನೀಲಾ ಅವರು ಬೆನ್ನುಡಿಯಲ್ಲಿ  ಕೆಲವು ವಿಡಂಬನಾತ್ಮಕ ಕವನಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕರೆ ನೀಡುತ್ತವೆ ಎಂದು ಶ್ಲಾಘಿಸಿದ್ದಾರೆ. ಯಾದಗಿರಿ ಕಸಾಪ ಜಿಲ್ಲಾ ಅಧ್ಯಕ್ಷರಾದ ಶ್ರೀ ಸಿದ್ದಪ್ಪ ಹೋಟ್ಟಿ ಯವರು ಇವರ ಕೃತಿಗೆ ಶುಭ ಹಾರೈಸಿದ್ದಾರೆ.. 
ಮನದಂಗಳದಿ ಕೃತಿಗೆ ಇವರ ಸಹೋದರರಾದ ವೈದ್ಯ ಸಾಹಿತಿ ಶ್ರೀ ಸಮೀರ್ ಹಾದಿಮನಿಯವರು ಬಿಡಿಸಿದ ವ್ಯಂಗ್ಯ ಚಿತ್ರಗಳು ಮೆರಗು ತಂದಿವೆ.. 
ಮನದಂಗಳದಿ ಕೃತಿಯ ಜೊತೆಗೆ ಇವರ ಸಹೋದರರಾದ ವೈದ್ಯ ಸಾಹಿತಿ ಡಾ. ಸಮೀರ್ ಹಾದಿಮನಿಯವರ ಮೂರು ಕೃತಿಗಳು ಸೇರಿ ಒಟ್ಟಿಗೆ ನಾಲ್ಕು ಕೃತಿಗಳು ಒಂದೇ ದಿನ ಲೋಕಾರ್ಪಣೆಗೊಳ್ಳುತ್ತಿರುವುದು ವಿಶೇಷ..  ಲೋಕಾರ್ಪಣೆಗೊಳ್ಳುತ್ತಿರುವ ಈ ಕೃತಿಗಳಿಗೆ ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಯ ಎಲ್ಲಾ ಸಿಬ್ಬಂದಿಗಳ ಪರವಾಗಿ ಹಾಗೂ ವೈಯಕ್ತಿಕವಾಗಿ ಹರುಷ ವ್ಯಕ್ತಪಡಿಸುವುದರೊಂದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ..  ಅಭಿನಂದನೆಗಳು, ಮೇಡಂ💐💐

ಬಸವರಾಜ ಭೂತಿ. ಹಿಂದಿ ಶಿಕ್ಷಕರು


School Photos

 

ಬರದ ಬರೆ

  ಮೊನ್ನೆ ಶನಿವಾರ ಅರ್ಧ ದಿನದ ಶಾಲೆ ಮುಗಿಸಿ,  ಬಸ್ಸತ್ತಿ  ಊರ ಕಡೆಗೆ ಹೊರಟೆ. ನನ್ನೂರಿಗೆ ಹೋಗದೆಯು ತುಂಬಾ ದಿನಗಳಾಗಿತ್ತು. ಹೋಗುವ ದಾರಿ ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ ಬ...