ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಎಂಥ ಚಂದ, ಎಂಥ ಅಂದ ಕರುನಾಡು,
ಹಸಿರು ಸೀರೆಯುಟ್ಟು ಬೆಟ್ಟ ನಲಿತಾವ ನೋಡು |
ಎದ್ದು ಬಿದ್ದು ಓಡಿ ಆಡೋ ನದಿಗಳ ನೋಡು,
ಎಂಥ ಚಂದ ಗಂಧ ತಿಡಿದಂಗ ಜೇನು ಗೂಡು..||
ತೆಂಗು-ಕಂಗು, ಮಾವು-ಬೇವು ನೆಲ್ಲಿ ಹಲುಸು,
ಬೆಳಿದು ನಿಂತಾವ ನೋಡಿಲ್ಲಿ ಎಷ್ಟು ಹುಲುಸು..|
ನವಿಲು ಸಾರಂಗ ಹಕ್ಕಿ ಪಿಕ್ಕಿಗಳ ಇದು ನೆಲೆಸು,
ನೋಡು ಬಾ ನಮ್ಮ ಕರುನಾಡು ಎಂಥಾ ಸೊಗಸು..||
ನಾಡು ಕೋಟೆ ಕಟ್ಟಿ ನಾವು ಇಲ್ಲಿ ಮೆರೆದೋರು
ಬಂಗಾರ ಬೆಳ್ಳಿ ನೆಲ ಹೊಕ್ಕು ತೆಗೆದೊರು..|
ಕಲ್ಲಿನ್ಯಾಗ ಹೂ ಅರಳಿನಿಂತ ಪಟ್ಟದಕಲ್ಲು ಬೇಲೂರು,
ಶಿಲ್ಪಿ ಕಲೆಗಳಿಗೆ ಹೆಸರು, ನಮ್ಮ ತವರೂರು..||
ಪ್ರೀತಿ ಸ್ನೇಹ ಹಂಚಿ ನಾವು ಇಲ್ಲಿ ಬಾಳೋರು,
ಮತ ಪಂಥ ನಮಗಿಲ್ಲ, ಇಲ್ಲಿ ಎಲ್ಲಾರೂ ನಮ್ಮೊರು|
ಅಣ್ಣ ತಮ್ಮರಂತೆ ನಾವು ಕೂಡಿ ಬದುಕೋರು,
ಮಾನವೀಯತೆಯೊಂದೆ ಇಲ್ಲಿ ನಮಗೆ ಸೂರು..||
ನಮ್ಮ ನಾಡ ವೇಷ-ಭಾಷೆ ನಮಗೆ ಉಸಿರು,
ಸಾಹಿತ್ಯ ಸಂಸ್ಕೃತಿಗೆ ನಾವು ಎಂದು ಹೆಸರು..|
ತಾಯಿ ಸೇವೆ ಮಾಡಲೆಂದೇ ನಮ್ಮ ಉಸಿರು,
ಎಲ್ಲರೂ ಸೇರಿ ಎಳೆಯೋಣ, ಕನ್ನಡಮ್ಮನ ತೇರು..||
+++++++++++++++++++++++++++++
ರಚನೆ:- ಬಸವರಾಜ ಭೂತಿ,
ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಬೇವಿನಹಳ್ಳಿ ಕ್ರಾಸ್ ಶಹಾಪುರ.
ಮೋ. ನಂ. 9900804567
No comments:
Post a Comment