ನನ್ನ ಸ್ಮೃತಿ ಪಟಲ ದಲ್ಲಿರುವಂತೆ ೨೦೧೧ ಡಿಸೆಂಬರನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಗೊಂಡಾಗ ನಾನಿನ್ನು ಸುಣಗಾರ ಪಿಯು ಕಾಲೇಜನಲ್ಲಿ ಅರೆಕಾಲಿಕ ಶಿಕ್ಷಕನಾಗಿ ಮತ್ತು ಆಲಮೇಲ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೆ.
ಫಲಿತಾಂಶದ ಸುದ್ದಿ ತಿಳಿದ ಕ್ಷಣವೇ ಶಾಲೆ ಬಿಟ್ಟು ಮಧ್ಯಾಹ್ನವೇ ಊರಿಗೆ ಹೊರಟು ನಿಂತೆ ಸಿಂದಗಿಗೆ. ಬರುವ ದಾರಿ ಮಧ್ಯ ಮನಸ್ಸಿಗೆ ಏನೋ ಒಂಥರ ಕುತೂಹಲ ಕಸಿವಿಸಿ ಕಳವಳ ಭಯ ಮನದಲ್ಲಿ ವiನೆಮಾಡಿತ್ತು. ಹೇಗೋ ಆಯ್ಕೆಯಾದ ವಿಷಯ ನಾನು ಬರುವಷ್ಟರಲ್ಲೆ ಊರಲೆಲ್ಲ ಸ್ನೇಹಿತರಿಗೆ ತಿಳಿದಿತ್ತು.
ಬರುಬರುತ್ತಲೆ ನನಗೆ ಶುಭಾಶಯ ತಿಳಿಸಲು ಪ್ರಾರಂಭಿಸಿದರು. ನನಗೆ ಗೊತ್ತಿರದೆ ನಾನು ಕೆಟಗೆರಿ ಕೋಟಾದಡಿಯಲ್ಲಿ ಆಯ್ಕೆಯಾಗಿದ್ದೆ. ಇದು ಇನ್ನೂ ತಾತ್ಕಾಲಿಕ ಆಯ್ಕೆ ಪಟ್ಟಿಯಾಗಿದ್ದರಿಂದ ಅಂತಿಮ ಆಯ್ಕೆ ಪಟ್ಟಿ ಬರುವರೆಗೂ ಹೆಚ್ಚಿಗೆ ಖುಷಿ ಪಡುವದು ಬೇಡವೆಂದು ಸುಮ್ಮನಾದೆ.
ರಾಜ್ಯದಲ್ಲೆಲ್ಲೂ ಹಿಂದಿ ಹುದ್ದೆ ಖಾಲಿ ಇರದ ಕಾರಣ ಹೆಚ್ಚುವರಿಯಾಗಿ. ಮರು ಸ್ಥಳ ನಿಯುಕ್ತಿಯವರೆಗೆ ಬೆಂಗಳೂರಿನಲ್ಲೆ ಇರಬೇಕಾಯಿತು. ನನ್ನಂತೆ ನೂರಾರು ಜನ ಶಿಕ್ಷಕರು ಹೆಚ್ಚುವರಿಯಾಗಿ ಮರು ಸ್ಥಳ ನಿಯುಕ್ತಿಗಾಗಿ ಕೇಂದ್ರ ಕಚೇರಿ ಮುಂದೆ ದಿನಾ ಕಾಯುತಿದ್ದರು. ಆಗಿನ್ನು ನನಗೆ ಸಂಬಳವು ಇರಲಿಲ್ಲ ಹತ್ತಿರ ಬಿಡಿಗಾಸು ಇರಲಿಲ್ಲ ಊರಿಗೆ ಹೊಗೋಕು ಆಗದೆ ಅಲ್ಲೆ ಇರಾಕು ಆಗದೆ ಪರದಾಡಿದೆ.
ಅಗಷ್ಟ ೧೪. ೨೦೧೨ ರಂದು ಬಂದು ಹಾಜರಾದೆ. ಊರ ಕಡೆಗೆ ಬಂದ ಖುಷಿಯೊಂದಡೆಯಾದರೆ. ಮೂಲಭೂತ ಸೌಕರ್ಯವು ಇರದೆ ಆಗೀಗ ಬಿಳುವಂತ ಬಾಡಿಗೆ ಕಟ್ಟಡದ ಆ ಶಾಲೆಯ ಸ್ಥಿತಿ ಮನಸ್ಸಿಗೆ ತುಂಬಾ ಬೇಸರವಾಯಿತು. ಇದ್ದರಿಂದ ಆ ಶಾಲೆಯಲ್ಲಿ ಸಾಕಷ್ಟು ಸಮಸ್ಯೆ, ತೊಂದರೆಗಳನ್ನು ಎದುರಿಸಬೇಕಾಯಿತು. ಸುಧಾರಿಸಿಕೊಳ್ಳಲು ಹಲವು ದಿನಗಳೆ ಬೇಕಾದವು. ಕಷ್ಟನೋ, ಸುಖನೋ ಒಂದು ವರ್ಷ ಕರ್ತವ್ಯ ನಿರ್ವಹಿಸಿದೆ.
ಎಲ್ಲವು ಸರಿಯಾಗಿ ನಡೆಯುತ್ತಿದೆಯನ್ನುವಷ್ಟರಲ್ಲಿ ಮತ್ತೆ ನನ್ನ ಮರು ವಿನ್ಯಾಸದಡಿ ವರ್ಗಾವಣೆಮಾಡಿ ಮಂಡ್ಯ ಜಿಲ್ಲೆಯ ಪಾಂಡವಪುರಕ್ಕೆ ಆದೇಶಿಸಲಾಯಿತು. ಏನಮಾಡುವುದು ಒಂದು ತಿಳಿಯದೆ ಬೆಂಗಳೂರಿಗೆ ಓಡಿ ಬಂದು ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಜೆ.ಡಿ ಸರ್ ಬಳಿ ನನ್ನ ಸಮಸ್ಯ ತೊಡಿಕೊಂಡರು ಕೆಳುವ ಪರಿಸ್ಥಿಯಲ್ಲಿ ಅವರಿರಲಿಲ್ಲ ಹಾಗೋ ಹಿಗೋ ಎನೊ ಒಂದು ಮಾಡಿ ಸ್ಥಳ ಉಳಿಸಿಕೊಂಡು ಬಂದೆ. ಆಗ ಶಿಕ್ಷಣ ಇಲಾಖೆಯಲ್ಲಿ ನೇಮಕಾತಿಯಾದ್ದರಿಂದ ಶಹಾಪುರನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ
ಹಿಂದಿ ಹುದ್ದೆ ಖಾಲಿಗಿದ್ದು ಅಲ್ಲೆ ಕೆಲಸ ಮಾಡುತಿದ್ದ ಸ್ನೇಹಿತರೊಬ್ಬರಿಂದ ತಿಳಿತು. ದೌಡಮಾಡಿ ಈ ಶಾಲೆಗೆ ವರ್ಗಾಯಿಸಿಕೊಂಡು ಬಂದೆ. ವಾರ್ಡನ ಹುದ್ದೆಗಿಂತ ನನಗೆ ಶಿಕ್ಷಕ ಹುದ್ದೆಯಲ್ಲೆ ನನಗೆ ತೃಪ್ತಿ. ಕಾಕತಾಳಿಯ ಎಂಬAತೆ ನಿಲಯ ಪಾಲಕನಾಗಿ ನಿಯೋಜನೆಗೊಂಡ ದಿನದಂದೆ ಅಗಸ್ಟ ೧೪. ೨೦೧೩ರಂದೆ ಬಂದು ಈ ಶಾಲೆಗೆ ಹಾಜರಾದೆ.
ನಿಜ ಹೇಳಬೇಕು ಅಂದ್ರೆ ಇಷ್ಟು ದಿನದ ಈ ಶಿಕ್ಷಕ ವೃತ್ತಿ ಸಾಕಷ್ಟು ತೃಪ್ತಿ ತಂದಿದೆ. ೧೦ ವರ್ಷದ ಈ ನನ್ನ ಸೇವೆಯಲ್ಲಿ ವೃತ್ತಿ ನಿಷ್ಠನಾಗಿ ಬೋಧನೆಗೆ ಮೋಸ ಮಾಡದೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಿದೆನೆಂಬ ಆತ್ಮಭಿಮಾನ ನನ್ನಲ್ಲಿದೆ. ಶಾಲೆ ಹಾಗೂ ಮಕ್ಕಳ ಶ್ರೇಯೋಭಿವೃದ್ದಿಗಾಗಿ ದುಡಿಯುವ ಹಂಬಲವಿದೆ.
ಈ ಶಾಲೆಯಿಂದ, ಮಕ್ಕಳಿಂದ, ಜೊತೆಗಾರ ವೃತ್ತಿ ಮಿತ್ರರಿಂದ, ತುಂಬಾನೆ ಕಲಿತಿದ್ದೆನೆ. ಇನ್ನು ಕಲಿಬೇಕಾಗಿದ್ದು ತುಂಬಾ ಇದೆ. ಈ ಶಾಲೆ ಮತ್ತು ಈ ಜಿಲ್ಲೆ ನನಗ್ಯಾವುದು ಕೊರತೆ ಮಾಡಿಲ್ಲ ಒಬ್ಬ ಉತ್ತಮ ಶಿಕ್ಷಕನಾಗಿ ಪುರಸ್ಕರಿಸಿದೆ, ನನ್ನೊಬ್ಬ ಕವಿ, ಸಾಹಿತಿಯಾಗಿ ನನ್ನನ್ನ ಅನೇಕ ವೇದಿಕೆಗಳಲ್ಲಿ ಸತ್ಕರಿಸಿ ಸನ್ಮಾನಿಸಿದೆ. ಸಂಪನ್ಮೂಲ ವ್ಯಕ್ತಿಯಾಗಿ ಗೌರವಿಸಿದೆ. ಪ್ರತಿ ವಿಷಯದಲ್ಲೂ ನನ್ನ ಶಾಲೆ ನನ್ನ ಮಕ್ಕಳು ನಮ್ಮ ಪ್ರಾಂಶುಪಾಲರು ಶಿಕ್ಷಕರೂ ನನ್ನ ಜೊತೆಗಿದ್ದಾರೆ.
ಈ ನಮ್ಮ KREIS ಸಂಸ್ಥೆಯು ನನ್ನನ್ನ ಆರ್.ಆಯ್.ಇ ಮೂಲಕ ತರಬೇತಿ ನೀಡಿ ರಾಜ್ಯ ಹಿಂದಿ ಭಾಷಾ ಸಂಪನ್ಮೂಲ ವ್ಯಕ್ತಿಯನ್ನಾಗಿ ಮಾಡಿದೆ, ಹಿಂದಿ ಭಾಷಾ ವಿಷಯದ ಲರ್ನಿಂಗ್ ಪ್ಯಾಕೆಜ್, ಮಾದರಿ ಪ್ರಶ್ನೆ ಪತ್ರಿಕೆ ತಯಾರಿಕೆ, ಹೀಗೆ ಸಂಘದ ಅನೇಕ ಕಾರ್ಯಗಳಲ್ಲಿ ನನ್ನನ್ನ ಒಬ್ಬ ಸದಸ್ಯನಾಗಿ ಗುರುತಿಸಿದೆ. ಸೆಟಲೈಟ ಮೂಲಕ ಡಿ.ಎಸ್.ಈ.ಆರ್.ಟಿ ಸ್ಟುಡಿಯೋದಲ್ಲಿ ಟೆಲಿ ಕಾಂಪ್ರೆನ್ಸ್ ಮೂಲಕ ತರಬೇತಿ ನೀಡಿಲು ಅವಕಾಶ ಮಾಡಿಕೊಟ್ಟಿದೆ.
ನನ್ನಿಂದೆನಾರು ತಪ್ಪಾಗಿದ್ದರೆ ಕ್ಷಮೆಯಾಚಿಸುತ್ತಾ ೧೦ ವರ್ಷದ ಈ ಸೇವಾವಧಿಯಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಜೀವನಪೂರ್ತಿ ಆಭಾರಿಯಾಗಿರುವೆ.
ಇಂತಿ ನಿಮ್ಮವ
■ ಬಸವರಾಜ ಭೂತಿ. ಹಿಂದಿ ಭಾಷಾ ಶಿಕ್ಷಕರು
No comments:
Post a Comment